About Me

My photo
Bangalore, Karnataka, India
goodhearty@gmail.com

Tuesday, February 19, 2013

ಮನಸು

 ಎಂದೂ ಸುಮ್ಮನಿರದೆ,
ಆ ದಿಬ್ಬ ಈ ದಿಬ್ಬ , ಆ ಏರಿ ಈ ಏರಿ
ಹತ್ತಿಳಿದು  ಸುತ್ತಿಸಿ, ಪ್ರಶ್ನೆಗೆ ನೂಕುತ್ತಿತ್ತು.
ಇಂದೇಕೋ ಮಾತನಾಡದು  ಮನಸು!


ನೋವ -ಮನದಲಿ  ಇಣುಕಿ ಅಣಕಿಸಿ
ಪರಿ ಪರಿ ಯಾಗಿ ಕಾಡಿ ಕುಣಿದು
ನೆನಪುಗಳ ಸರಪಳಿಗೆ  ಉಸಿರ ಬಿಗಿದು ನಗುತ್ತಿತ್ತು.
ಇನ್ನೇಕೊ   ಸುಮ್ಮನಿರುವುದು   ಮನಸು!


ಕಿರು ದನಿಯಲೇ  ಗುನುಗಿ, ಅರಚಿ
ತಿಳಿದ ರಾಗವನೆ ಬಯಸಿ , ಬೆಸೆದು
ಮರುಗಿ ಧ್ಯಾನದಲೇ ಬಳಲುತ್ತಿತ್ತು.
ಈಗ್ಯಾಕೋ ಮನಸು ಮಾಡದು  ಮನಸು!


ಕವನಗಳ ಗೀಚಿ , ಹರಿದು
ಕನಸುಗಳ ಕಟ್ಟಿ, ಕೆಡವಿ
ಬಿಡದೆ ಕತ್ತಲಿನಲ್ಲಿ ಕಾಡುತಿತ್ತು .
ಹೀಗೇಕೋ ಮೌನ ವಾಗಿದೆ ಮನಸು!
ಮುಂದೇನು ಮಾಡುವುದು ಮನಸು?

                                      -ವೀರಭದ್ರ ಎಸ್ ಹೆಗಡೆ

Thursday, February 7, 2013

ಬಿಡಿ-ಗವನಗಳು 1


 ೧. ಎದೆಯನ್ನು ಬಗೆದೆ ಬರಿದಿದ್ದೆ  ಪ್ರೇಮ ಕವನ
    ಮಾಡಲಾಗದೆ ಕವನದ ಮನನ
    ತಿರುಗಿ ಬರೆದಳು
    ಅಣ್ಣ ನಿನಗೆ ನನ್ನ ನಮನ  :)

 

೨. ಸುಳಿ ಮಿಂಚಿನಂತೆ ಸೆಳೆದಿತ್ತು ಅವಳ  ನಯನದ ನೋಟ
    ನಗುವು ಹೊಂಗನಸಾಗಿ ಮಾಡಿತ್ತು ಮನಕೆ ಮಾಟ
    ತಿಳಿಯಲು ಹಿಂದೆಯೆ  ಸಾಗಿತ್ತು ನನ್ನ ಓಟ
    ತಿಳಿದು ತಡವರಿಸದೆ ತಿರುಗಿ ನುಡಿದಳು ,
    ನನ್ನ ಕಾಲಿಗಿರುವುದು ಒರಿಜಿನಲ್ ಬಾಟ !

 
೩. ನನಸಾಗುವ ವೇಳೆಗೆ ,
    ಆತ ಕನಸನ್ನು ಕಾಯಿಸಿದ,
    ನನಸಾಗದಿದ್ದಾಗ  ಕಾದ ...
    ಕನಸಿನ ಕಾವಲಿಯಲಿ ಇನ್ನೂ ಕಾದ!!


೪. ಆತ ಎಂದಿಗೂ ಆಕೆಯ,
    ನಗುವಿಗೆ ನಲಿದವನಲ್ಲ
    ಸಿಡುಕಿಗೆ ಮರುಗುವನಲ್ಲ
    ಅಳಲಿಗೆ ಕರಗುವನಲ್ಲ 
    ಆದರೆ ಇಂದು ಮೌನಕ್ಕೆ   ಶರಣಾದ !


೫. ಕನಸು  ಮನಸು ಎರಡು ಒಂದೇ ಆಗಿತ್ತು
    ನಂತರ ,
    ಕನಸು ಕವಿಯಿತು ಮನಸು ಮುರಿಯಿತು
    ಆನಂತರ,
    ಕನಸು ಮನಸು ಬೇರೆ ಆಯಿತು
    ಕನಸು ಅರಳಿತು ,ಮನಸು ಮಿಡಿಯಿತು.

                       --ವೀರಭದ್ರ ಎಸ್ ಹೆಗಡೆ