About Me

My photo
Bangalore, Karnataka, India
goodhearty@gmail.com

Saturday, September 17, 2011

ಮುಗ್ದ ಯಾರು?

ಅಜನೊಮ್ಮೆ  ಕುಂಭಿನಿಯ ಒಳಹೊಕ್ಕಿ ನೋಡಿದನು           
ಮುಗುದತೆಯ ಮಾನ ದಂಡ ಹಿಡಿದು
ಸುಜನರ ಮುಖವಾಡ ಕಳಚಿಟ್ಟು ಕಂಡನು
ಪ್ರೇತಗಳ ದಂಡಲ್ಲಿ  ಮುಗ್ದ ಯಾರು?


ಆಕೆ ಇರಬಹುದೇ ? ಈತನ್ಯಾಕಲ್ಲ?
ಇಣುಕಿದನು - ಅಳುಕಿದನು ಮರುಗಿದನು 
ಮುಗ್ದನನು ಕಾಣದೆಯೇ ದಿಗಿಲಾದನು
ಏಕೆಂದರೆ ಕಾರ್ಮೋಡದಲ್ಲೆಲ್ಲ  ಬ್ರಂಗ ಬಿಂದು

ಶಾಂತಿಯ ಬೆನ್ನೇರಿ ಸತ್ಯದ ಕುದುರೆಯಲಿ
ಹೊರಟಿಹನು ಹುಡುಕಲು ಮುಗುದ ಜೀವ 
ಎಲ್ಲೆಲ್ಲೂ ನಕಾರ ಕಾಮಕ್ಕೆ ಆಕಾರ
ನನ್ನ  ಸೃಷ್ಟಿಯೇ ಎಂದು ಪ್ರಶ್ನಿಸಿದನು


ಕಪಟತನವು   ಮೆರಗಿಹುದು,ಮುಗುದತೆಯು ಮರಗಿಹುದು
ಓಂಕಾರದಲ್ಲೆಲ್ಲ ವಿಕಾರದ ಕುರುಹು 
ಅದೇ ಮಸನದಲಿ ಅನು  ದಿನವು ಹುಡುಕಿದರೂ
 ಸೃಷ್ಟಿಕರ್ತನ  ಸುತ್ತ ಅಂಧ ಸಾಲು!

ಕೊನೆಗೂ ಫಲಿಸಿತ್ತು ಅಜನ ಶೋಧ
ತಾಯಿಯ  ಗರ್ಭದಲಿ ಒಳಹೊಕ್ಕಿ ಕಂಡನು
ಅರಳಿತ್ತು ಅಲ್ಲೊಂದು ಮುಗುದ ಹೂವು
"ಇರುವ ಮುಗುದತೆಯೆಲ್ಲ ಜೀವ ತಳೆದು"
      ---ವೀರಭದ್ರ ಎಸ್ ಹೆಗಡೆ 

ಸುತ್ತಲು ಪತಿವ್ರತದ ಬೇಲಿ ಹಾಕಿ

ಕಣ್ಣರಳಿಸುತ್ತ ಕಾಯುವಳು 
ಸುತ್ತಲು ಪತಿವ್ರತದ ಬೇಲಿ ಹಾಕಿ
ಕನವರಿಸುತ್ತ ಮಲಗಿದಳು 
ಕಾಮದ ನೆರಳನ್ನು ಆಚೆ ನೂಕಿ

ಅತ್ತಿತ್ತ-ಇತ್ತತ್ತ ಮುತ್ತಿಹರು ದಾನವರು
ಸತ್ತ ಸಾತ್ವಿಕದ ಅಂಚಿನಲ್ಲಿ
ಎತ್ತಲು ಕಾಣದಯೇ ಪತಿದೈವ ಬಾರದಯೇ 
ಶಪಿಸುತ್ತ ಸಾಯುವಳೇ ಲಂಕೆಯಲ್ಲಿ? 

ಮರುಕವನು ತೊಡದೆಯೇ ಸೆರಗಿನಲಿ ಬಚ್ಚಿಟ್ಟು
ಮನದಲ್ಲಿ ರಾಮನ ಸ್ಮರಣೆಯನು ಹೂತಿಟ್ಟು 
ಬೆರಗಾದ ಬಾವುಲಿಗೆ ಬುಸುಗುಡುವಳು
ಇಂದು ಬಂದಿಹ ಹನುಮ ಎಂದು ಬರುವನು ರಾಮ?
ಎಂದು ಯುಗ-ಯುಗಕು ಸೀತೆ ಪ್ರಲಾಪಿಸಿಹಳು

ಅನುದಿನವು ಅಸುನೀಗಿ ಭಾವನೆಗೆ ಬಲವಾಗಿ
ಕಟ್ಟೆಯನು ಕಣ್ಣೀರು ಕೊರೆದೊರಟಿತು
ಕಾಮುಕನ ಕಡಿದರು ವನವಾಸ ತೊರೆದರು
ಅಂತ್ಯದಲ್ಲಿ ಆಗಬೇಕೆ ಅಗ್ನಿಗೆ ತುತ್ತು?

ಕಣ್ಮುಚ್ಚುತ್ತ ಕಾದಳು
"ಸುತ್ತಲು ಪತಿವ್ರತದ ಬೇಲಿ ಹಾಕಿ"
       -ವೀರಭದ್ರ ಎಸ್ ಹೆಗಡೆ  

Friday, September 2, 2011

ಹಾಗೆ ಸುಮ್ಮನೆ....



ಪ್ರೀತಿ ಪ್ರೀತಿ ಎಂದು ಏಕೆ ಬಿಡಬೇಕು ಬಾಯಿ?
ಪ್ರೀತಿ ಪ್ರೀತಿ ಎಂದು ಏಕೆ ಬಿಡಬೇಕು ಬಾಯಿ?
ಪ್ರೀತಿಯ ಪೂರವನ್ನೇ ಹರಿಸುತ್ತಿಲ್ಲವೇ,
ನಮ್ಮ ನಿಮ್ಮೆಲರ ತಾಯಿ?
                          ----ವೀರಭದ್ರ ಎಸ್ ಹೆಗಡೆ